ಗುಂಜಾ ನರಸಿಮ ಸ್ವಾಮಿ ದೇವಸ್ಥಾನವು ತಿರುಮಕೂಡಲು ನರಸೀಪುರದಲ್ಲಿರುವ ಹಿಂದೂ ದೇವಾಲಯವಾಗಿದೆ, ಇದು ಮೈಸೂರು ಜಿಲ್ಲೆಯ, ಕರ್ನಾಟಕ ರಾಜ್ಯದ, ಭಾರತದಲ್ಲಿದೆ. ಈ ಪಟ್ಟಣವು ಮೈಸೂರಿನಿಂದ ಆಗ್ನೇಯಕ್ಕೆ ೨೦ ಮೈಲುಗಳಷ್ಟು ದೂರದಲ್ಲಿದೆ. ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ಸುಮಾರು ೧೬ ನೇ ಆಳ್ವಿಕೆಗೂ ಹಿಂದಿನದು ಮತ್ತು ಪ್ರವೇಶ ದ್ವಾರದ ಮೇಲೆ (ಮಹಾದ್ವಾರ) ಭವ್ಯವಾದ ಗೋಪುರ ಮತ್ತು ಗರ್ಭಗುಡಿಯ ಮುಂಭಾಗದಲ್ಲಿ ನಾಲ್ಕು ಕಂಬಗಳ ಮಂಟಪವಿದ್ದು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಕಾವೇರಿ ನದಿ ಮತ್ತು ಕಬಿನಿ ನದಿಯ ಸಂಗಮದಲ್ಲಿದೆ ಮತ್ತು ಇದನ್ನು ಹಿಂದೂಗಳು ಪವಿತ್ರಕ್ಷೇತ್ರವೆಂದು ಪರಿಗಣಿಸುತ್ತಾರೆ. ಮುಖ್ಯ ದ್ವಾರದ ಮುಂಭಾಗದಲ್ಲಿ ಬೆಳೆಯುವ ಗುಂಜಾ (ಗುಲಗಂಜಿ) ಮರದಿಂದಾಗಿ (ಸಸ್ಯ ಶಾಸ್ತ್ರದಲ್ಲಿ ಅಬ್ರಸ್ ಪ್ರಿಕಾಟೋರಿಯಸ್ ) ದೇವಾಲಯವು ಈ ಹೆಸರನ್ನು ಪಡೆದುಕೊಂಡಿದೆ; ಗುಲಗಂಜಿ ಗಿಡದ ತೂಕದಷ್ಟು ವಾರಣಾಸಿ (ಕಾಶಿ) ಗಿಂತ ಈ ದೇವಾಲಯವು ಹೆಚ್ಚು ಪವಿತ್ರವಾಗಿದೆ ಎಂಬುದು ಸ್ಥಳೀಯರು ಹೆಮ್ಮೆಯಿಂದ ಹೇಳಿಕೋಳ್ಳುತ್ತಾರೆ. ದೇವಾಲಯದಲ್ಲಿನ ಶಿಲ್ಪಗಳು ಹಿಂದೂ ದೇವರು ನರಸಿಂಹ (ಗುಂಜಾ ಬೆರ್ರಿ ಮತ್ತು ಕಾಂಡವನ್ನು ಹಿಡಿದಿರುವ) ಮತ್ತು ರಾಕ್ಷಸ ರಾಜ ಹಿರಣ್ಯಕಶಿಪುವನ್ನು ಒಳಗೊಂಡಿವೆ. ಬ್ರಿಟಿಷ್ ರಾಜ್ ಇತಿಹಾಸಕಾರ ಮತ್ತು ಶಾಸನಶಾಸ್ತ್ರಜ್ಞ ಬಿ. ಲೆವಿಸ್ ರೈಸ್ ಪ್ರಕಾರ, ಈ ದೇವಾಲಯವು ವಾರ್ಷಿಕ ನಿರ್ವಹಣೆಯೊಂದಿಗೆ ಮೈಸೂರಿನ ("ಊಳಿಗಮಾನ್ಯ ಪ್ರಭು") ಆಶ್ರಯದಲ್ಲಿತ್ತು. ಈ ಸಮಯದಲ್ಲಿ ದೇವಾಲಯವು ದುರಸ್ತಿ ಮತ್ತು ನವೀಕರಣವಾಯಿತು ಎಂದು ದಾಖಲೆಗಳು ಸೂಚಿಸುತ್ತವೆ ಎನ್ನುತ್ತಾನೆ. ಈ ದೇವಾಲಯವು ಭಾರತೀಯ ಪುರಾತತ್ವ ಸಮೀಕ್ಷೆಯ ಕರ್ನಾಟಕ ರಾಜ್ಯ ವಿಭಾಗದ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ. "ಅಗಸ್ತ್ಯೇಶ್ವರ" ದೇವಸ್ಥಾನ ಎಂದು ಕರೆಯಲ್ಪಡುವ ಮತ್ತೊಂದು ದೇವಾಲಯವಿದೆ, ಮತ್ತು ಎರಡೂ ದೇವಾಲಯಗಳು ವಾರ್ಷಿಕವಾಗಿ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸುವ ಧಾರ್ಮಿಕ ಜಾತ್ರೆಯ ( ಜಾತ್ರಾ ) ಸ್ಥಳವಾಗಿದೆ. == ಗ್ಯಾಲರಿ == == ಬಾಹ್ಯ ಕೊಂಡಿಗಳು == == ಉಲ್ಲೇಖಗಳು ==